ಕರ್ನಾಟಕ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗ್ರಹಲಕ್ಷ್ಮಿ ಯೋಜನೆ ಅತ್ಯಂತ ಮುಖ್ಯವಾದ ಯೋಜನೆ, ಏಕೆಂದರೆ ಇದು ರಾಜ್ಯದ ಎಲ್ಲ ಮಹಿಳೆಯರಿಗೂ ಒಂದು ಯೋಜನೆ ಅಂತ ಹೇಳಬಹುದು ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ನೀಡಲಾಗಿದೆ.
ಗೃಹಲಕ್ಷ್ಮಿ ಯೋಜನೆ ಯಾರಿಗೆಲ್ಲ ಸಿಗುತ್ತೆ.
ಗ್ರಹಲಕ್ಷ್ಮಿ ಯೋಜನೆ ರಾಜ್ಯದಲ್ಲಿ ಇರುವಂತಹ ಎಲ್ಲಾ ಮಹಿಳೆಯರಿಗೆ ಈ ಯೋಜನೆ ಅನ್ವಯಿಸುತ್ತೆ ಮತ್ತೆ ಇದಕ್ಕೆ ಕೆಲವೊಂದಿಷ್ಟು ಶರತುಗಳಿವೆ ಈ ಶರತುಗಳು ಯಾವವೆಂದರೆ. ಈ ಯೋಜನೆಯ ಪಡೆಯುವರು ಮೊದಲು ಕರ್ನಾಟಕದವರಾಗಿರಬೇಕು ಮತ್ತು ಯಾವುದೇ TAX ಅಥವಾ GST ಕಟ್ಟುವಂತ ವ್ಯಕ್ತಿಗಳಾಗಿರಬಾರದು.
ಟ್ಯಾಕ್ಸ್ ಮತ್ತು GST ಕಟ್ಟುವಂತಹ ಫ್ಯಾಮಿಲಿಗೆ ಈ ಯೋಜನೆ ಸಿಗೋದಿಲ್ಲ.
ಹೌದು ರಾಜ ಸರ್ಕಾರ ಘೋಷಣೆ ಮಾಡಿರುವ ಹಾಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ಯಾರೆಲ್ಲ ಯೋಜನೆಯ ಪಡೆಯಲು ಸಾಧ್ಯವಿಲ್ಲ ಅಂದ್ರೆ ಅದು ಟ್ಯಾಕ್ಸ್ ಕಟ್ಟುವಂತಹ ಫ್ಯಾಮಿಲಿ ಆಗಲಿ ಮತ್ತು GST ಕಟ್ಟುವಂತಹ ಫ್ಯಾಮಿಲಿ ಆಗಲಿ ಅಂತಹ ಕುಟುಂಬಗಳಿಗೆ ಈ ಒಂದು ಯೋಜನೆ ಸಿಗುವುದಿಲ್ಲ ಅಂತ ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ.
ರೇಷನ್ ಕಾರ್ಡ್ ಬೇಕೇ ಬೇಕಾ?
ಹೌದು ರಾಜ ಸರ್ಕಾರ ಘೋಷಣೆ ಮಾಡುವ ಹಾಗೆ ಈ ಒಂದು ಯೋಜನೆಯಲ್ಲಿ ಮನೆಯ ಮುಖ್ಯಸ್ಥರು ಯಾರು ಅಂತ ಕಂಡು ಹಿಡಿಯಲು ಈ ಒಂದು ರೇಷನ್ ಕಾರ್ಡ್ ಅತ್ಯಂತ ಪ್ರಮುಖವಾದ ವಸ್ತು ಆಗಿದ್ದು, ಇದರಿಂದ ಪ್ರತಿಯೊಂದು ಕುಟುಂಬದಲ್ಲಿ ಮನೆ ಯಜಮಾನ ಯಾರು ಅಂತ ಸುಲಭವಾಗಿ ಕಂಡುಹಿಡಿಯಬಹುದು. ಅದಕ್ಕೋಸ್ಕರ ರಾಜ್ಯ ಸರ್ಕಾರ ಈ ಒಂದು ರೇಷನ್ ಕಾರ್ಡ್ ದಾಖಲಾತಿ ಖಂಡಿತ ಬೇಕು ಅಂತ ಹೇಳಿದ್ದಾರೆ.
ಎಪಿಎಲ್ ಕಾರ್ಡ್ ಇದ್ರೂ ನಡೆಯುತ್ತಾ?
ಹೌದು ಈಗಾಗಲೇ ಮೇಲೆ ತಿಳಿಸಿರುವ ಹಾಗೆ ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕು ಅಂತ ಹೇಳಿದ್ದಾರೆ. ಒಂದು ರೇಷನ್ ಕಾರ್ಡ್ ಅತ್ಯಂತ ಪ್ರಮುಖವಾದ ವಸ್ತು ಆಗಿದ್ದು, ಇದರ ಅವಶ್ಯಕತೆ ತುಂಬಾ ಇದೆ ಏಕೆಂದರೆ ಪ್ರತಿಯೊಂದು ರೇಷನ್ ಕಾರ್ಡ್ ನಲ್ಲಿ ಕುಟುಂಬದ ಸದಸ್ಯರು ಮತ್ತು ಅದರ ಮುಖ್ಯಸ್ಥರು ಇರುತ್ತಾರೆ. ಅಂದರೆ ಕುಟುಂಬದ ಯಜಮಾನಿ ಮೊದಲನೇ ಪುಟದಲ್ಲಿ ಇರುತ್ತಾರೆ, ಕುಟುಂಬ ಸದಸ್ಯರು ಇರುತ್ತಾರೆ. ಆದಕಾರಣ ತುಂಬಾ ಸುಲಭವಾಗಿ ನಾವು ಮನೆ ಯಜಮಾನಿ ಯಾರು ಅಂತ ಕಂಡುಹಿಡಿಯಬಹುದು. ಆದ ಕಾರಣ ರೇಷನ್ ಕಾರ್ಡ್ ಯಾವುದೇ ಇರಲಿ ನಡೆಯುತ್ತೆ. ರೇಷನ್ ಕಾರ್ಡ್ ನಲ್ಲಿ ಮೂರು ವಿಧಗಳಿವೆ, ಅದರಲ್ಲಿ ಎಪಿಎಲ್, ಬಿಪಿಎಲ್, ಅಂತೋದಯ ಈ ಮೂರು ಕಾರ್ಡ್ ಗಳು ತುಂಬಾ ಅವಶ್ಯಕತೆ ಇದ್ದು ರಾಜ್ಯ ಸರ್ಕಾರ ಈ ಒಂದು ತೀರ್ಮಾನ ಮಾಡಿದೆ ಅಂತಾನೆ ಹೇಳಬಹುದು.
ಈ ಯೋಜನೆಗೆ ಬೇಕಾಗುವಂತಹ ದಾಖಲಾತಿಗಳು
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ವೋಟರ್ ಐಡಿ
- ಜಾತಿ ಮತ್ತು ಅದಾಯ ಪ್ರಮಾಣ ಪತ್ರ
- ಗಂಡನ ವೋಟರ್ ಐಡಿ
- ಆಧಾರ್ ಕಾರ್ಡ್ ಬೇಕು
ತಮ್ಮ ಆಧಾರ ಕಾರ್ಡ ಬ್ಯಾಂಕ್ ಅಕೌಂಟಿಗೆ ಲಿಂಕ್ ಇರಬೇಕು.
ಈ ಯೋಜನೆಯನ್ನು ಪಡೆಯಲು, ಬಡತನ ರೇಖೆಗಿಂತ ಕೆಳಗಿರುವ (BPL), ಮತ್ತು ಬಡತನ ರೇಖೆಗಿಂತ ಮೇಲಿನ (APL) ಕುಟುಂಬಗಳ ಮಹಿಳೆಯರು ತಮ್ಮ ಬ್ಯಾಂಕ್ ಖಾತೆ ವಿವರಗಳು, ಆಧಾರ್ ಕಾರ್ಡ್ ಮತ್ತು ಮನೆಯ ಮಾಲೀಕತ್ವವನ್ನು ದೃಢೀಕರಿಸುವ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಪ್ರಕ್ರಿಯೆಯು ಜೂನ್ 15 ರಿಂದ ಜುಲೈ 15 ರವರೆಗೆ ತೆರೆದಿರುತ್ತದೆ. ಒಮ್ಮೆ ಅರ್ಜಿಗಳನ್ನು ಪರಿಶೀಲಿಸಿದ ನಂತರ, ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಯೋಜನೆಯನ್ನು ಪ್ರಾರಂಭಿಸಲಾಗುತ್ತದೆ. ಮನೆ ಯಜಮಾನಿಗೆ ಹಣಕಾಸಿನ ನೆರವು ನೀಡಲು ಸರ್ಕಾರವು ಸಮರ್ಪಿತವಾಗಿದೆ. ಅವರ ಕುಟುಂಬವನ್ನು ನಿರ್ವಹಿಸುವ ಮತ್ತು ಅವರ ಕಷ್ಟಗಳನ್ನು ಸಹಿಸಿಕೊಳ್ಳುವ ಜವಾಬ್ದಾರಿಯನ್ನು ಹೊರುತ್ತಾರೆ.
ಅರ್ಜಿ ಸಲ್ಲಿಸುವ ವಿಧಾನ
ಈ
ಒಂದು ಯೋಜನೆಯನ್ನು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಅಂತ ರಾಜ ಸರ್ಕಾರ ತೀರ್ಮಾನ ಮಾಡಿದೆ
ಮತ್ತೆ ಈ ಒಂದು ಅರ್ಜಿ ಸಲ್ಲಿಸಬೇಕಾದ ವೆಬ್ಸೈಟ್ ಗಳು ಸೇವಾ ಸಿಂಧು, ಗ್ರಾಮ ಒನ್, ಕರ್ನಾಟಕ ಒನ್,
ಬೆಂಗಳೂರು ಒನ್ ಈ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಈ ಒಂದು ಅರ್ಜಿಯನ್ನು ಸಲ್ಲಿಸಬಹುದು ಮತ್ತೆ ಇದರ
ಜೊತೆಗೆ ನಿಮಗೆ ಬೇಕಾಗುವಂತಹ ದಾಖಲಾತಿಗಳನ್ನು ತೆಗೆದುಕೊಂಡು ಹೋಗಬೇಕು. ಸರಿಯಾದ ದಾಖಲಾತಿಗಳು ಇಲ್ಲದಿದ್ದರೆ
ಈ ಒಂದು ಅರ್ಜಿಯನ್ನು ತಿರಸ್ಕರಿಸಲಾಗುವುದು. ಆದಕಾರಣ ಪ್ರತಿಯೊಬ್ಬ ಅರ್ಜಿದಾರರು ತಮ್ಮ ದಾಖಲಾತಿಗಳು
ಸರಿಯಾಗಿ ಇವೆಯೇ ಎಂದು ಪರಿಶೀಲಿಸಿ, ಈ ಒಂದು ಅರ್ಜಿಯನ್ನು ಸಲ್ಲಿಸಬಹುದು
ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?
ಈ ಒಂದು ಯೋಜನೆಯನ್ನು ಸೇವಾ ಸಿಂಧೂ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಮೊದಲಿಗೆ ಸೇವಾ ಸಿಂಧು ವೆಬ್ಸೈಟ್ನಲ್ಲಿ ರಿಜಿಸ್ಟರ್ ಮಾಡಬೇಕಾಗುತ್ತೆ. ರಿಜಿಸ್ಟರ್ ಮಾಡಿದ ಮೇಲೆ ಲಾಗಿನ್ ಮಾಡಬೇಕಾಗುತ್ತೆ. ಲಾಗಿನ್ ಮಾಡೋದಕ್ಕೆ ನಿಮ್ಮ ಮೊಬೈಲ್ ನಂಬರ್ ಮತ್ತೆ ಪಾಸ್ವರ್ಡ್ ನ ಸಲ್ಲಿಸಬೇಕಾಗುತ್ತೆ ಕೆಳಗಡೆ ಕಾಣುತ್ತಿರುವ ಚಿತ್ರದಲ್ಲಿ ನೀವು ನೋಡಬಹುದು.

- ಲಾಗಿನ್ ಮಾಡಿದ ತಕ್ಷಣ ಸೇವಾ ಸಿಂಧು ವೆಬ್ಸೈಟ್ನಲ್ಲಿ ಆಲ್ ಅವೈಲಬಲ್ ಸರ್ವಿಸಸ್ ಅದರ ಮೇಲೆ ಕ್ಲಿಕ್ ಮಾಡಿ.
- ನಂತರ ಸರ್ಚ್ ಬಾಕ್ಸ್ ನಲ್ಲಿ ನಿಮಗೆ ಬೇಕಾಗುವ ಯೋಜನೆಯ ಬಗ್ಗೆ ಬರೆದು ಹುಡುಕಬೇಕು.
- ನಂತರ ಆ ಒಂದು ಯೋಜನೆಯ ಅರ್ಜಿ ಓಪನ್ ಆಗುತ್ತೆ ಅವಾಗ ಅರ್ಜಿಯನ್ನು ಸಲ್ಲಿಸಬಹುದು.

ಈ ರೀತಿಯಾಗಿ ನೀವು ನಿಮ್ಮ ಒಂದು ದಾಖಲಾತಿಗಳೊಂದಿಗೆ ಗೃಹಲಕ್ಷ್ಮಿ ಯೋಜನೆಯನ್ನು ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಲಿಂಕ : https://sevasindhugs1.karnataka.gov.in/

1 thought on “ಗೃಹಲಕ್ಷ್ಮಿ ಯೋಜನೆ ಅರ್ಜಿ ಪ್ರಾರಂಭ ಎಲ್ಲಾ ಮಹಿಳೆಯರಿಗೂ 2000 ರೂ ಖಚಿತ.”