ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರದಿಂದ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ 2023-24ನೇ ಸಾಲಿಗೆ ಅನುಷ್ಠಾನಗೊಳಿಸುತ್ತಿರುವ ನಿಗಮದ ಯೋಜನೆಗಳು ಬಿಡುಗಡೆ ಮಾಡಿದೆ. ಈ ಒಂದು ನಿಗಮದಲ್ಲಿ ವೀರಶೈವ ಲಿಂಗಾಯತ ಜಾತಿಗೆ ಹಾಗೂ ಉಪ ಜಾತಿಗೆ ಸೇರಿದ ಸಮುದಾಯದ ಜನರು ಇದರಲ್ಲಿ ಬರುವಂತಹ ಎಲ್ಲಾ ಯೋಜನೆಗಳನ್ನು ಅರ್ಜಿಗಳನ್ನ ಸಲ್ಲಿಸಬಹುದು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು. ಇದರ ಒಂದು ಕೊನೆ ದಿನಾಂಕ ಯಾವಾಗ ಇದರ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ನೋಡಬಹುದು.
ಮೆಲೆ ತಿಳಿಸಿರುವ ಹಾಗೆ 2023-24ನೇ ಸಾಲಿನಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ಯೋಜನೆಗಳ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲಾತಿಗಳನ್ನು ಒದಗಿಸಬೇಕು ಅರ್ಜಿಯನ್ನು ಸಲ್ಲಿಸುವುದು ಹೇಗೆ ಅಂತ ಕೆಳಗಡೆ ವಿವರವಾಗಿ ನೋಡಬಹುದು.
ನಿಗಮದಲ್ಲಿ ಬಿಡುಗಡೆಯಾದ ಯೋಜನೆಗಳು
- ಶೈಕ್ಷಣಿಕ ಸಾಲ ಯೋಜನೆಗಳು
- ಜೀವ ಜಲ ಯೋಜನೆ
- ಕಾಯಕ ಕಿರಣ ಯೋಜನೆ
- ಭೋಜನ ಆಲಯ ಕೇಂದ್ರ
- ವಿಭೂತಿ ನಿರ್ಮಾಣ ಘಟಕ
- ಸ್ವಾವಲಂಬಿ ಸಾರಥಿ ಯೋಜನೆ
ಸ್ವಯಂ ಉದ್ಯೋಗ ಸಾಲ ಯೋಜನೆ
ಎಲ್ಲ ಅರ್ಜೆಗಳನ್ನು ಎಲ್ಲಿ ಸಲ್ಲಿಸಬಹುದು
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮನಿಯಮಿತ ಎಲ್ಲ ಯೋಜನೆಗಳನ್ನು ಅರ್ಜಿ ಸಲ್ಲಿಸಲು
- ಗ್ರಾಮ ಒನ್
- ಕರ್ನಾಟಕ ಒನ್
- ಬೆಂಗಳೂರು ಒನ್
ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-10-23
ಅರ್ಜಿ ಸಲ್ಲಿಸಲು ಬೇಕಾಗುವಂತಹ ಮುಖ್ಯ ದಾಖಲಾತಿಗಳು
ಈ ನಿಗೆಮದಲ್ಲಿ ಬೇಕಾಗುವಂತಹ ಮುಖ್ಯವಾದ ದಾಖಲೆಗಳು
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಆಧಾರ್ ಕಾರ್ಡ್ ಮೊಬೈಲ್ ನಂಬರ್ ಲಿಂಕ್ ಇರಬೇಕು
- ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಲಿಂಕ್ ಆಗಿರಬೇಕು
- ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿರುವಂತಹ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ.
ಈ ಒಂದು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವಂತಹ ಅರ್ಹತೆಗಳು
ಈ ಒಂದು ನಿಗಮದಲ್ಲಿ ಅರ್ಜಿ ಸಲ್ಲಿಸಬೇಕಾದರೆ ಮುಖ್ಯವಾಗಿ
- ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು
- ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿರಬೇಕು
- ನಿಮ್ಮ ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆಗೆ ಜೋಡಣೆ ಆಗಿರಬೇಕು
- ನಿಮ್ಮ ಆಧಾರ್ ಖಾತೆಗೆ ಬ್ಯಾಂಕ್ ಖಾತೆಗೆ ಸೀಡ್ ಆಗಿರ್ಬೇಕು
- ಕಳೆದ ಮೂರು ವರ್ಷಗಳಿಂದ ಕುಟುಂಬದ ಯಾವುದೇ ಸದಸ್ಯರು ಯಾವುದೇ ನಿಗಮ ಇಲಾಖೆಗಳಲ್ಲಿ ಸರ್ಕಾರ ದಿಂದ ಯಾವುದೇ ಯೋಜನೆ ಸೌಲಭ್ಯ ಪಡೆದಿರಬಾರದು.
ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು
ಈ ನಿಗಮದಿಂದ ಅರ್ಜಿ ಸಲ್ಲಿಸಲು
- ಕನಿಷ್ಠ 18 ವರ್ಷ ಆಗಿರಬೇಕು
- ಗರಿಷ್ಠ 50 5 ವರ್ಷ ಒಳಗಡೆ ಇರಬೇಕು