ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ಹೊಸ ಯೋಜನೆಗಳು ಪ್ರಾರಂಭ

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರದಿಂದ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ 2023-24ನೇ ಸಾಲಿಗೆ ಅನುಷ್ಠಾನಗೊಳಿಸುತ್ತಿರುವ ನಿಗಮದ ಯೋಜನೆಗಳು ಬಿಡುಗಡೆ ಮಾಡಿದೆ. ಒಂದು ನಿಗಮದಲ್ಲಿ ವೀರಶೈವ ಲಿಂಗಾಯತ ಜಾತಿಗೆ ಹಾಗೂ ಉಪ ಜಾತಿಗೆ ಸೇರಿದ ಸಮುದಾಯದ ಜನರು ಇದರಲ್ಲಿ ಬರುವಂತಹ ಎಲ್ಲಾ ಯೋಜನೆಗಳನ್ನು ಅರ್ಜಿಗಳನ್ನ ಸಲ್ಲಿಸಬಹುದು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು. ಇದರ ಒಂದು ಕೊನೆ ದಿನಾಂಕ ಯಾವಾಗ ಇದರ ಸಂಪೂರ್ಣ ಮಾಹಿತಿ ಒಂದು ಲೇಖನದಲ್ಲಿ ನೋಡಬಹುದು.

ಮೆಲೆ ತಿಳಿಸಿರುವ ಹಾಗೆ 2023-24ನೇ ಸಾಲಿನಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ಯೋಜನೆಗಳ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲಾತಿಗಳನ್ನು ಒದಗಿಸಬೇಕು ಅರ್ಜಿಯನ್ನು ಸಲ್ಲಿಸುವುದು ಹೇಗೆ ಅಂತ ಕೆಳಗಡೆ ವಿವರವಾಗಿ ನೋಡಬಹುದು.

ನಿಗಮದಲ್ಲಿ ಬಿಡುಗಡೆಯಾದ ಯೋಜನೆಗಳು

  • ಶೈಕ್ಷಣಿಕ ಸಾಲ ಯೋಜನೆಗಳು
  • ಜೀವ ಜಲ ಯೋಜನೆ
  • ಕಾಯಕ ಕಿರಣ ಯೋಜನೆ
  • ಭೋಜನ ಆಲಯ ಕೇಂದ್ರ
  • ವಿಭೂತಿ ನಿರ್ಮಾಣ ಘಟಕ
  • ಸ್ವಾವಲಂಬಿ ಸಾರಥಿ ಯೋಜನೆ

ಸ್ವಯಂ ಉದ್ಯೋಗ ಸಾಲ ಯೋಜನೆ

ಎಲ್ಲ ಅರ್ಜೆಗಳನ್ನು ಎಲ್ಲಿ ಸಲ್ಲಿಸಬಹುದು

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮನಿಯಮಿತ ಎಲ್ಲ ಯೋಜನೆಗಳನ್ನು ಅರ್ಜಿ ಸಲ್ಲಿಸಲು

  • ಗ್ರಾಮ ಒನ್
  • ಕರ್ನಾಟಕ ಒನ್
  •  ಬೆಂಗಳೂರು ಒನ್

ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-10-23

ಅರ್ಜಿ ಸಲ್ಲಿಸಲು ಬೇಕಾಗುವಂತಹ ಮುಖ್ಯ ದಾಖಲಾತಿಗಳು

ನಿಗೆಮದಲ್ಲಿ ಬೇಕಾಗುವಂತಹ ಮುಖ್ಯವಾದ ದಾಖಲೆಗಳು

  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಆಧಾರ್ ಕಾರ್ಡ್ ಮೊಬೈಲ್ ನಂಬರ್ ಲಿಂಕ್ ಇರಬೇಕು
  • ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಲಿಂಕ್ ಆಗಿರಬೇಕು
  • ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿರುವಂತಹ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ.

ಒಂದು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವಂತಹ ಅರ್ಹತೆಗಳು

ಒಂದು ನಿಗಮದಲ್ಲಿ ಅರ್ಜಿ ಸಲ್ಲಿಸಬೇಕಾದರೆ ಮುಖ್ಯವಾಗಿ

  • ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು
  • ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿರಬೇಕು
  • ನಿಮ್ಮ ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆಗೆ ಜೋಡಣೆ ಆಗಿರಬೇಕು
  • ನಿಮ್ಮ ಆಧಾರ್ ಖಾತೆಗೆ ಬ್ಯಾಂಕ್ ಖಾತೆಗೆ ಸೀಡ್ ಆಗಿರ್ಬೇಕು
  • ಕಳೆದ ಮೂರು ವರ್ಷಗಳಿಂದ ಕುಟುಂಬದ ಯಾವುದೇ ಸದಸ್ಯರು ಯಾವುದೇ ನಿಗಮ ಇಲಾಖೆಗಳಲ್ಲಿ ಸರ್ಕಾರ ದಿಂದ ಯಾವುದೇ ಯೋಜನೆ ಸೌಲಭ್ಯ  ಪಡೆದಿರಬಾರದು.

ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು

ನಿಗಮದಿಂದ ಅರ್ಜಿ ಸಲ್ಲಿಸಲು 

  • ಕನಿಷ್ಠ 18 ವರ್ಷ ಆಗಿರಬೇಕು 
  • ಗರಿಷ್ಠ 50 5 ವರ್ಷ ಒಳಗಡೆ ಇರಬೇಕು

Leave a comment