ನಮಸ್ಕಾರ ಸ್ನೇಹಿತರೇ ರಾಜ್ಯದ ರೈತರಿಗೆ ಒಂದು ಗುಡ್ ನ್ಯೂಸ್ ಅದು ಏನಪ್ಪಾ ಅಂದರೆ ಕರ್ನಾಟಕ ರಾಜ್ಯ ಸರ್ಕಾರ ಬರಗಾಲದಿಂದ ಹಾನಿಯಾದ ರೈತರಿಗೆ ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ. ಇದನ್ನು ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಇದು ಯಾರಿಗೆ ಸಿಗುತ್ತೆ ಇದರ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ನೋಡಬಹುದು.
ಸ್ನೇಹಿತರೆ ಮೇಲೆ ತಿಳಿಸಿರುವ ಹಾಗೆ ರಾಜ್ಯದ ರೈತರಿಗೆ ಬೆಳೆ ಪರಿಹಾರ ಬಿಡುಗಡೆಯಾಗಿದೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಬೆಳೆ ಪರಿಹಾರ ಬಂದಿದ್ದು ಇನ್ನೂ ಕೆಲವು ಜಿಲ್ಲೆಗಳು ಬಾಕಿ ಇದೆ ಬಿಡುಗಡೆಯಾದ ಜಿಲ್ಲೆಗಳಲ್ಲಿ ರೈತರು ನಿಮ್ಮ ಒಂದು ಬೆಳೆ ಪರಿಹಾರ ಹಣ ಬಂದಿದೆ ಚೆಕ್ ಮಾಡೋದು ಹೇಗೆ ಅಂತ ಈ ಒಂದು ಲೇಖನದಲ್ಲಿ ನೋಡಬಹುದು.
ಬೆಳೆ ಪರಿಹಾರ ಅರ್ಜಿ ಸಲ್ಲಿಸುವುದು ಹೇಗೆ
- ಬೆಳೆ ಪರಿಹಾರಕ್ಕೆ ಯಾವುದೇ ರೀತಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಇರೋದಿಲ್ಲ.
- ಅಜ್ಜಿ ಸಲ್ಲಿಸಬೇಕಾದರೆ ನಿಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತೆ.
- ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂತಹ ಸರ್ವೇ ಆಫೀಸರ್ ಬಂದು ಸರ್ವೇ ಮಾಡಿ ನಿಮ್ಮ ಒಂದು ಬೆಳೆ ಹಾನಿಗೆ ಪರಿಹಾರ ಕೊಡುತ್ತಾರೆ ಅಂತಾನೆ ಹೇಳಬಹುದು.
- ರೈತರ ಬೆಳೆ ಪರಿಹಾರ ಪಡೆಯಲು fid ಕಡ್ಡಾಯವಾಗಿ ಇರಬೇಕಾಗುತ್ತೆ.
- ಎಫ್ ಐ ಡಿ ಇದ್ದರೆ ಮಾತ್ರ ನಿಮ್ಮ ಒಂದು ಬೆಳೆ ಪರಿಹಾರ ನಿಮ್ಮ ಒಂದು ಅಕೌಂಟಿಗೆ ಜಮಾ ಆಗುತ್ತೆ.
ಬೆಳೆ ಪರಿಹಾರ ಸ್ಟೇಟಸ್ ಚೆಕ್ ಮಾಡುವುದು ಹೇಗೆ
- ಬೆಳೆ ಪರಿಹಾರ ಸ್ಟೇಟಸ್ ಚೆಕ್ ಮಾಡಲು https://landrecords.karnataka.gov.in/PariharaPayment/ ಈ ಒಂದು ಲಿಂಕ್ ನ ಕ್ಲಿಕ್ ಮಾಡಿ.
- ನಂತರ ನಿಮ್ಮ ಪರಿಹಾರ ಐಡಿ ಎಂಟ್ರಿ ಮಾಡಿ ಬೆಳೆ ಪರಿಹಾರ ಸ್ಥಿತಿಯನ್ನು ನೋಡಬಹುದು.
- ಅಥವಾ ಬೆಳೆ ಪರಿಹಾರ ಐಡಿ ಇಲ್ಲ ಅಂದರೆ ಆಧಾರ್ ಕಾರ್ಡ್ ಮೂಲಕ ನಿಮ್ಮ ಒಂದು ಬೆಳೆ ಪರಿಹಾರ ಸ್ಥಿತಿಯನ್ನು ಚೆಕ್ ಮಾಡಬಹುದು.
- ಈ ರೀತಿಯಾಗಿ ಬೆಳೆ ಪರಿಹಾರ ಸ್ಥಿತಿಯನ್ನು ನೋಡಬಹುದು.
ಪರಿಹಾರ ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲಾತಿಗಳು
- ಆಧಾರ್ ಕಾರ್ಡ್
- ಹೊಲದ ಉತಾರಿ
- ಬ್ಯಾಂಕ್ ಪಾಸ್ ಬುಕ್
- FID ಎಫ್ ಐ ಡಿ ಸಂಖ್ಯೆ
Umesh G. Raddi