ಅಂಬೇಡ್ಕರ್ ನಿಗಮ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ 2025 – ಅರ್ಜಿ ಪ್ರಕ್ರಿಯೆ, ಅರ್ಹತೆ ಮತ್ತು ಸಂಪೂರ್ಣ ಮಾಹಿತಿ

ಅಂಬೇಡ್ಕರ್ ನಿಗಮ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ 2025 – ಅರ್ಜಿ ಪ್ರಕ್ರಿಯೆ, ಅರ್ಹತೆ ಮತ್ತು ಸಂಪೂರ್ಣ ಮಾಹಿತಿ

ಅಂಬೇಡ್ಕರ್ ಅಭಿವೃದ್ಧಿ ನಿಗಮವು ಕರ್ನಾಟಕದ ಅಸಹಾಯಕರಿಗೆ, ವಿಶೇಷವಾಗಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯದವರಿಗೆ ಆರ್ಥಿಕ ಬಲವನ್ನು ನೀಡುವ ಉದ್ದೇಶದಿಂದ ಹಲವಾರು ಕಲ್ಯಾಣಕರ ಯೋಜನೆಗಳನ್ನು ಜಾರಿಗೊಳಿಸಿದೆ. ಆ ಯೋಜನೆಗಳಲ್ಲಿ ಪ್ರಮುಖವಾದುದು “ಸ್ವಯಂ ಉದ್ಯೋಗ ನೇರ ಸಾಲ ಯೋಜನೆ”.

ಈ ಯೋಜನೆಯ ಮೂಲಕ ಉದ್ಯೋಗಕ್ಕಾಗಿ ಓಡಾಡುವ ಬದಲು ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಅಗತ್ಯವಿರುವ ಸಾಲ ಮತ್ತು ಸಹಾಯಧನವನ್ನು ನಿಗಮ ಒದಗಿಸುತ್ತದೆ.

ಯೋಜನೆಯ ಮುಖ್ಯ ಉದ್ದೇಶ

  • ನಿರುದ್ಯೋಗಿ ಯುವಕರು ಹಾಗೂ ಮಹಿಳೆಯರು ಸ್ವಂತ ವ್ಯವಹಾರ ಪ್ರಾರಂಭಿಸಲು ನೆರವು.
  • ಆರ್ಥಿಕ ಸ್ವಾವಲಂಬನೆ ಸಾಧಿಸಲು ಆರ್ಥಿಕ ಬೆಂಬಲ.
  • ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಸರ್ಕಾರದ ಪ್ರೋತ್ಸಾಹ.

ಅರ್ಹತಾ ನಿಯಮಗಳು

ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗಿನ ನಿಯಮಗಳು ಅನ್ವಯಿಸುತ್ತವೆ:

1. ನಿವಾಸ: ಅರ್ಜಿದಾರರು ಕರ್ನಾಟಕದ ಶಾಶ್ವತ ನಿವಾಸಿಯಾಗಿರಬೇಕು.

2. ಜಾತಿ: ಪರಿಶಿಷ್ಟ ಜಾತಿ (SC) ಅಥವಾ ಪರಿಶಿಷ್ಟ ಪಂಗಡ (ST)ಗೆ ಸೇರಿದವರಾಗಿರಬೇಕು.

3. ವಯಸ್ಸು: ಕನಿಷ್ಠ 18 ವರ್ಷ ಹಾಗೂ ಗರಿಷ್ಠ 55 ವರ್ಷ ವಯಸ್ಸು.

4.ಆದಾಯ: ಕುಟುಂಬದ ವಾರ್ಷಿಕ ಆದಾಯ ಸರ್ಕಾರ ನಿಗದಿ ಮಾಡಿದ ಮಿತಿಯೊಳಗೆ ಇರಬೇಕು.

5.ಹಿಂದಿನ ನೆರವು: ಅರ್ಜಿದಾರರು ಹಿಂದಿನಿಂದಲೂ ನಿಗಮದಿಂದ ಸಹಾಯಧನ ಪಡೆದುಕೊಂಡಿರಬಾರದು.

6. ಉದ್ಯೋಗ: ಸರ್ಕಾರಿ ಅಥವಾ ಅರೆ ಸರ್ಕಾರಿ ಉದ್ಯೋಗದಲ್ಲಿರಬಾರದು.

ಆರ್ಥಿಕ ಸಹಾಯದ ವಿವರ

      ಸಹಾಯದ ಪ್ರಕಾರ ಮೊತ್ತ 

  1. ಯೋಜನೆಯ ಒಟ್ಟು ವೆಚ್ಚ ₹1,00,000
  2. ಸರ್ಕಾರದಿಂದ ಸಬ್ಸಿಡಿ ₹50,000 (50%)
  3. ನಿಗಮದಿಂದ ಸಾಲ ₹50,000 (4% ಬಡ್ಡಿದರ)

ಅಗತ್ಯ ದಾಖಲೆಗಳು

  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ವಾಸಸ್ಥಳ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರಗಳು
  • ಪಾಸ್‌ಪೋರ್ಟ್ ಸೈಜ್ ಫೋಟೋ
  • ಉದ್ಯಮ
  • ಯೋಜನೆ ವರದಿ
  • ರೇಷನ್ ಕಾರ್ಡ್ 

ಅರ್ಜಿ ಸಲ್ಲಿಸುವ ವಿಧಾನ

1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: adcl.karnataka.gov.in

2. ಹೊಸ ಬಳಕೆದಾರ ನೋಂದಣಿ ಮಾಡಿ.

3. ಲಾಗಿನ್ ಮಾಡಿ “ಸ್ವಯಂ ಉದ್ಯೋಗ ನೇರ ಸಾಲ ಯೋಜನೆ” ಆಯ್ಕೆ ಮಾಡಿ.

4. ಅಗತ್ಯ ಮಾಹಿತಿಯನ್ನು ನಮೂದಿಸಿ.

5. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

6. ಅರ್ಜಿಯನ್ನು ಪರಿಶೀಲಿಸಿ, ಸಲ್ಲಿಸು ಬಟನ್ ಒತ್ತಿ.

7. ಅರ್ಜಿ ಸಂಖ್ಯೆಯನ್ನು ಸುರಕ್ಷಿತ

ವಾಗಿ ಇಟ್ಟುಕೊಳ್ಳಿ.

ಅಂಬೇಡ್ಕರ್ ನಿಗಮ 2025 ಹೊಸ ಯೋಜನೆಗಳು ಪ್ರಾರಂಭ

2025-26 ನೇ ಸಾಲಿನಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮವು ಪರಿಶಿಷ್ಟ ಜಾತಿಗೆ (SC) ಮತ್ತು ಪರಿಶಿಷ್ಟ ಪಂಗಡ (ST) ಗಳಿಗೆ ಹಲವಾರು ಹೊಸ ಯೋಜನೆಗಳನ್ನು ಪ್ರಾರಂಭಿಸಿದೆ.

Read More »

ಅಂಬೇಡ್ಕರ್ ನಿಗಮ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ 2025 – ಅರ್ಜಿ ಪ್ರಕ್ರಿಯೆ, ಅರ್ಹತೆ ಮತ್ತು ಸಂಪೂರ್ಣ ಮಾಹಿತಿ

ಅಂಬೇಡ್ಕರ್ ನಿಗಮ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ 2025 – ಅರ್ಜಿ ಪ್ರಕ್ರಿಯೆ, ಅರ್ಹತೆ ಮತ್ತು ಸಂಪೂರ್ಣ ಮಾಹಿತಿ ಅಂಬೇಡ್ಕರ್ ಅಭಿವೃದ್ಧಿ ನಿಗಮವು ಕರ್ನಾಟಕದ ಅಸಹಾಯಕರಿಗೆ,

Read More »

ಕರ್ನಾಟಕದ ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತ ವಿದ್ಯಾರ್ಥಿವೇತನ 2025 ಅರ್ಜಿ ಪ್ರಾರಂಭ

ಕರ್ನಾಟಕ ಸರ್ಕಾರವು ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಆರ್ಥಿಕ ಸಹಾಯ ಒದಗಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ವಿದ್ಯಾರ್ಥಿವೇತನ ಯೋಜನೆಗಳನ್ನು ಜಾರಿಗೆ ತರುತ್ತಿದೆ. 2025-26 ನೇ ಸಾಲಿನ

Read More »

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ 2025

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ 2025 ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ 2025 ಎಲ್ಲಾ ಅರ್ಜಿದಾರರಿಗೂ ಕಡ್ಡಾಯ ದಾಖಲೆಗಳು:

Read More »

ಹೊಸ ರೇಷನ್ ಕಾರ್ಡ್ ಆರ್ಜಿ ಸಲ್ಲಿಸಲು ಕೊನೆಯ ದಿನಾಂಕ 2025.

2025ರಲ್ಲಿ ಕರ್ನಾಟಕದಲ್ಲಿ ಹೊಸ ಪಡಿತರ ಚೀಟಿ (ರೇಷನ್ ಕಾರ್ಡ್) ಅರ್ಜಿ ಹಾಕುವ ಬಗ್ಗೆ ಸಂಪೂರ್ಣ ಮಾಹಿತಿಯು ಈ ಒಂದು ಲೇಖನದಲ್ಲಿ ನೋಡಬಹುದು ಅರ್ಹತೆ ಮತ್ತು ಪಡಿತರ ಚೀಟಿ

Read More »

ಎಸ್‌ಎಸ್‌ಪಿ ವಿದ್ಯಾರ್ಥಿವೇತನ 2025 -26 ಕರ್ನಾಟಕದ ವಿದ್ಯಾರ್ಥಿಗಳಿಗೆ ಅರ್ಜಿ ಪ್ರಕ್ರಿಯೆ ಆರಂಭ.

ಕರ್ನಾಟಕದ ವಿದ್ಯಾರ್ಥಿಗಳೇ, ನಿಮ್ಮ ವಿದ್ಯಾಭ್ಯಾಸದ ಶುಲ್ಕವನ್ನು ಪೂರೈಸಲು ಆರ್ಥಿಕ ತೊಂದರೆ ಎದುರಾಗುತ್ತಿದ್ದರೆ, ಈ ಮಾಹಿತಿಯು ನಿಮಗಾಗಿ ಅಪಾರವಾಗಿ ಉಪಯುಕ್ತವಾಗಲಿದೆ. ಹೌದು, ಕರ್ನಾಟಕ ರಾಜ್ಯ ಸರ್ಕಾರವು ರೂಪಿಸಿರುವ ಮಹತ್ವದ

Read More »

Leave a comment